ಪಹಲ್ಗಾಮ್ ದಾಳಿಯ ಆರೋಪಿ ಆದಿಲ್ ಹುಸೇನ್‌ನ್‌ಗೆ ಆತನ ತಾಯಿ ಶೆಹಝಾದಾ ಬಾನೊ ಶರಣಾಗುವಂತೆ ಕೇಳಿಕೊಂಡಿದ್ದಾಳೆ. ತಾವೆಲ್ಲರೂ ಶಾಂತಿಯಿಂದ ಬದುಕಬೇಕೆಂದು ಮಗನನ್ನು ವಿನಂತಿಸಿದ್ದಾಳೆ. ಆದಿಲ್ ದಾಳಿ

ಮಾಡಿದ್ದಾನೆ ಎಂದು ನಂಬುವುದಿಲ್ಲ, ಆದರೆ ಈ ದಾಳಿ ಆತನೇ ನಡೆಸಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದ್ದಾಳೆ. 2018ರಿಂದ ಅತನ ಎಲ್ಲಿದ್ದಾನೆ ಎಂದೇ ಗೊತ್ತಿಲ್ಲ. ಪರೀಕ್ಷೆ ಬರೆಯಲು ಹೋಗಿದ್ದ ಆದಿಲ್ ಇನ್ನೂ ವಾಪಸ್ ಬಂದಿಲ್ಲ ಎಂದು ಶೆಹಝಾದಾ ಅಳಲು ತೋಡಿಕೊಂಡಿದ್ದಾಳೆ.